ಕಲಿಯುಗದ ಪಿಡುಗು: ಕರೋನಾವೈರಸ್‌ ಬಗ್ಗೆ ಒಂದಿಷ್ಟು ಮಾತುಕತೆ

ಕರೊನಾವೈರಸ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ ಪಿಡುಗು ಎಂದು ಘೋಷಿಸಿದ ಬೆನ್ನಲ್ಲೇ, ನಮ್ಮನ್ನು ನಾವು ವೈರಸ್ ನಿಂದ ರಕ್ಷಿಸಿಕೊಳ್ಳಬೇಕಾಗಿದೆ. ಅದಲ್ಲದೆ ಎಲ್ಲೆಡೆ ಕೇಳಿಬರುತ್ತಿರುವ ಮುಖಗವಸುಗಳ, ಹ್ಯಾಂಡ್ ಸ್ಯಾನಿಟೈಜರ್‌ಗಳ ಕೊರತೆ, ರೋಗದ ಲಕ್ಷಣಗಳು ಎಲ್ಲವೂ ಜನಸಾಮಾನ್ಯರಲ್ಲಿ ನಿತ್ಯದ ಚರ್ಚೆಯ ವಿಷಯವಾಗಿದೆ.

ಕಲಿಯುಗದ ಪಿಡುಗು: ಕರೋನಾವೈರಸ್‌ ಬಗ್ಗೆ ಒಂದಿಷ್ಟು ಮಾತುಕತೆ

Friday March 13, 2020,

3 min Read

ಕರೋನವೈರಸ್‌ನ ರೂಪಾಂತರದಿಂದ ಉಂಟಾಗುವ ಕೋವಿಡ್-19 ಎಂಬ ಸಾಂಕ್ರಾಮಿಕ ರೋಗದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಜನಸಾಮಾನ್ಯರಲ್ಲಿ ಜಾಗ್ರತಿ ಮನೆಮಾಡಿದೆ, ಏಕೆಂದರೆ “ರೋಗದ ತಡೆಗಟ್ಟುವಿಕೆ ಅದನ್ನು ಗುಣಪಡಿಸುವುದಕ್ಕಿಂತ ಒಳ್ಳೆಯದು”.


ನಮ್ಮ ಮನುಕುಲ ಕೆಲವು ದಶಕಗಳಿಂದ ಹಲವಾರು ಸಾಂಕ್ರಾಮಿಕ ರೋಗಗಳನ್ನು ಕಂಡಿದೆ. ಮನುಕುಲಕ್ಕೆ ಕಂಟಕವಾಗುವಂತ ಎಬೋಲಾ, ಎಸ್‌ಎಆರ್‌ಎಸ್‌ ಮೊದಲಾದ ವೈರಸ್‌ಗಳು ಜನರನ್ನು ಬಲಿತೆಗೆದುಕೊಂಡಿವೆ. ಈ ಹಿನ್ನಲೆಯಲ್ಲಿ ಮೊದಲು ನಾವು ವೈರಸ್ ಎಂದರೆ ಏನು ಎಂಬುದನ್ನು ಗಮನಿಸಬೇಕು.


ವೈರಸ್ ಎಂದರೇನು?

ಪ್ರೌಢಶಾಲೆಯಲ್ಲಿ ಕಲಿತ ಮೂಲಭೂತ ಜೀವವಿಜ್ಞಾನವನ್ನು ನೆನಪಿಸೋಕೊಳ್ಳಿ. ವೈರಸ್ ಎಂದರೆ ಜೀವಂತ ಅಥವಾ ನಿರ್ಜೀವವಲ್ಲದ ಜೀವಕೋಶ. ಅದು ಆತಿಥೇಯ ಜೀವಿಯ ಆಶ್ರಯಕ್ಕೆ ಬಂದ ನಂತರ ಅಭಿವೃದ್ಧಿ ಹೊಂದುತ್ತದೆ. ಇಲ್ಲಿ ವೈರಸ್ ಒಂದು ಸಣ್ಣ ಸಾಂಕ್ರಾಮಿಕ ಪ್ರತಿನಿಧಿ, ಅದು ಜೀವಿಯ ಜೀವಕೋಶಗಳ ಒಳಗೆ ಮಾತ್ರ ಪುನರಾವರ್ತಿಸುತ್ತದೆ.


ನಮ್ಮಲ್ಲಿ ಹೆಚ್ಚಿನವರು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಬಗ್ಗೆ ಗೊಂದಲಕ್ಕೊಳಗಾಗಿದ್ದಾರೆ, ಇಲ್ಲಿ ದೊಡ್ಡ ವ್ಯತ್ಯಾಸವಿದೆ. ವೈರಸ್ ಚಿಕ್ಕದಾಗಿದೆ ಮತ್ತು ಅದರ ಸುತ್ತಲೂ ಪ್ರೋಟೀನ್‌ನ ಗಾಳಿಯನ್ನು ಹೊಂದಿರುತ್ತದೆ. ಅದರೊಳಗೆ ಕೆಲವು ಡಿಎನ್‌ಎ ಅಥವಾ ಆರ್‌ಎನ್‌ಎ ಗಳಿರುತ್ತವೆ, ಇವು ಆರೋಗ್ಯಕರ ಕೋಶವನ್ನು ಆಕ್ರಮಿಸಿದಾಗ ಏನು ಮಾಡಬೇಕೆಂದು ಹೇಳುತ್ತದೆ.


ಈ ವೈರಸ್‌ಗಳು ಕೆಲವು ತಾಪಮಾನದಲ್ಲಿ ಸಾಮಾನ್ಯವಾಗಿ ಅಭಿವೃದ್ಧಿ ಹೊಂದುತ್ತವೆ, ಇದು ಅತಿಯಾದ ಶಾಖ ಅಥವಾ ಶೀತದಲ್ಲಿ ವಾಸಿಸಲು ಕಷ್ಟವಾಗಿಸುತ್ತದೆ.


ವೈರಸ್! ಇದು ಸಸ್ಯವು ಅಲ್ಲ, ಪ್ರಾಣಿಯು ಅಲ್ಲ. ನೀವು ಅದರ ಸಂಪರ್ಕಕ್ಕೆ ಬಂದಾಗ ಅದು ನಿಮ್ಮನ್ನು ಆಶ್ರಯಿಸುತ್ತದೆ. ನಮ್ಮ ಆರೋಗ್ಯವಂತ ಜೀವಿಕೋಶವನ್ನು ಆಕ್ರಮಿಸಿ ಅವುಗಳನ್ನ ನಾಶಪಡಿಸಿ ನಮ್ಮಲ್ಲಿನ ರೋಗ ನಿರೋಧಕ ಶಕ್ತಿ ಅನ್ನು ಕ್ಷೀಣಿಸಿ ಪ್ರಾಣಕ್ಕೆ ಸಂಚಕಾರವನ್ನು ತರುತ್ತದೆ.


ಹಾಗೆಯೇ, ನಮ್ಮ ದೇಹವು ರಕ್ಷಣಾ ಕಾರ್ಯವಿಧಾನವನ್ನು ಹೊಂದಿದೆ, ಅದು ಈ ವೈರಸ್ ಅನ್ನು ಆಕ್ರಮಣಕಾರರೆಂದು ಗುರುತಿಸುತ್ತದೆ ಮತ್ತು ಈ ವೈರಸ್‌ಗಳನ್ನು ತೊಡೆದುಹಾಕಲು ಪ್ರಯತ್ನಿಸುತ್ತದೆ. ವಯಸ್ಸಾದವರಿಗೆ ಅವರ ರೋಗನಿರೋಧಕ ವ್ಯವಸ್ಥೆಗಳು ಅಷ್ಟು ಶಕ್ತವಾಗಿಲ್ಲದಿರುವುದರಿಂದ ಮತ್ತು ಅವರ ರಕ್ಷಣಾ ಕಾರ್ಯವಿಧಾನವು ಸಾಕಷ್ಟು ಕೆಲಸ ಮಾಡದ ಕಾರಣ ಅವರಿಗೆ ವೈರಸ್ ಹೆಚ್ಚು ಹಾನಿಕಾರಕವಾಗಿದೆ.


ಹಾಗಾದರೆ ನಾವು ಈ ಸಮಸ್ಯೆಯನ್ನು ಹೇಗೆ ನಿಭಾಯಿಸಬಹುದು?

ಉತ್ತಮ ಮತ್ತು ಪರಿಣಾಮಕಾರಿ ಮಾರ್ಗವೆಂದರೆ ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ಮತ್ತು ಇನ್ನೊಂದು ನಿರ್ದಿಷ್ಟ ರೋಗಗಳ ವಿರುದ್ಧ ಲಸಿಕೆ ನೀಡುವುದು. ನಮ್ಮಲ್ಲಿ ಹೆಚ್ಚಿನವರು ರೋಗನಿರೋಧಕ ಲಸಿಕೆ ತೆಗೆದುಕೊಂಡಿರುವುದರಿಂದಲೆ ಮೊದಲ ಐದು ವರ್ಷಗಳಲ್ಲಿ ಲಕ್ಷಾಂತರ ಜೀವಗಳು ಉಳಿಯುತ್ತಿವೆ. ಉತ್ತಮ ಆರೋಗ್ಯ ಹಾಗೂ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡರೆ ಸದೃಢವಾಗಿ ಬದುಕಬಹುದಾಗಿದೆ.


ವೈರಸ್‌ಗಳ ಕಿರೀಟದಾರಿ ರಾಜಕುಮಾರ- ಕರೊನಾವೈರಸ್?

ಕಳೆದ ಕೆಲವು ವರ್ಷಗಳಿಂದ, ಕೆಲವು ಪ್ರಮುಖ ಸಾಂಕ್ರಾಮಿಕ ರೋಗಳನ್ನು ಹರಡುವ ವೈರಸ್‌ಗಳಲ್ಲಿ - ಕರೋನವೈರಸ್ ಕೂಡಾ ಒಂದು. ಇದು ನಾವು ನಿರಂತರವಾಗಿ ಕೇಳುತ್ತಿರುವ ರೋಗ ಮಾತ್ರವಲ್ಲ, ಇದು ನೆಗಡಿ, ಎಸ್‌ಎಆರ್‌ಎಸ್‌ ಮತ್ತು ಎಮ್‌ಇಆರ್‌ಎಸ್‌ ಅನ್ನು ಸಹ ಒಳಗೊಂಡಿದೆ.


ಈ ವೈರಸ್‌ಗಳು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತವೆ. ಎಸ್‌ಎಆರ್‌ಎಸ್‌ ಒಂದು ಸಿವೆಟ್ ಬೆಕ್ಕಿನಿಂದ ಬಂದರೆ, ಎಮ್‌ಇಆರ್‌ಎಸ್‌ ಡ್ರೊಮೆಡರಿ ಒಂಟೆಗಳಿಂದ ಮತ್ತು ಹೊಸ ವೈರಸ್‌ ಬಾವಲಿಗಳಿಂದ ಬಂದಿರಬಹುದು. ಪ್ರಾಣಿಗಳಿಂದ ಮನುಷ್ಯರಿಗೆ ಹರಡದ ವೈರಸ್‌ಗಳು ಹಲವಿವೆ. ನಾವು ಅನೇಕ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳ ನಡುವೆ ಬದುಕುತ್ತೇವೆ. ಆದರೆ ಎಲ್ಲವೂ ಅಪಾಯಕಾರಿ ಅಲ್ಲ.


ವೈರಸ್ ಪರಸ್ಪರ ನಿಕಟ ಸಂಪರ್ಕದಲ್ಲಿರುವ ಜನರ ನಡುವೆ (ಸುಮಾರು ಆರು ಅಡಿಗಳ ಒಳಗೆ) ಮತ್ತು ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನುವಾಗ ಉತ್ಪತ್ತಿಯಾಗುವ ಉಸಿರಾಟದ ಹನಿಗಳ ಮೂಲಕ ಹರಡಬಹುದು.


ಪ್ರಪಂಚದಾದ್ಯಂತದ ಸೋಂಕುಗಳು ಮತ್ತು ಸಾವುಗಳ ಸಂಖ್ಯೆಯ ಬಗ್ಗೆ ನಾವು ನೈಜ-ಸಮಯದ ದತ್ತಾಂಶವನ್ನು ಪಡೆದುಕೊಳ್ಳುತ್ತಿದ್ದಂತೆ, ಕೋವಿಡ್ -19 ಅನ್ನು ನಿಧಾನಗೊಳಿಸುವಲ್ಲಿ ನಮ್ಮಲ್ಲಿ ಪ್ರತಿಯೊಬ್ಬರೂ ಸಹಾಯ ಮಾಡಬಹುದು. ಅದಕ್ಕಾಗಿ ಈ ಕೆಳಗಿನ ಪರಿಣಾಮಕಾರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಿದೆ:


  1. ಕನಿಷ್ಠ 20 ಸೆಕೆಂಡುಗಳ ಕಾಲ ಸಾಬೂನು ಮತ್ತು ನೀರಿನಿಂದ ಕೈಗಳನ್ನು ತೊಳೆಯಿರಿ.
  2. ಯಾವಾಗಲೂ ನಿಮ್ಮೊಂದಿಗೆ ಸ್ಯಾನಿಟೈಜರ್ ಇಟ್ಟುಕೊಳ್ಳಿ ಮತ್ತು ನಿಮ್ಮ ಕಾರು, ಮನೆ ಮತ್ತು ಕಚೇರಿಯಲ್ಲಿಯೂ ಒಂದನ್ನು ಇರಿಸಿ.
  3. ವಿಮಾನದಲ್ಲಿ ಪ್ರಯಾಣಿಸುವಾಗ, ಟ್ರೇ ಟೇಬಲ್, ಟಿವಿ ಮತ್ತು ಇತರ ಮೇಲ್ಮೈಗಳನ್ನು ಆಲ್ಕೋಹಾಲ್ ನಿಂದ ಒರೆಸುವ ಮೂಲಕ ಸ್ವಚ್ಚಗೊಳಿಸಿ.
  4. ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವವರೊಂದಿಗೆ ನಿಕಟ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಿ.
  5. ಶೀತ/ಕೆಮ್ಮು ಇರುವ ಯಾರಾದರೂ ವೈರಸ್ ಹರಡುವುದನ್ನು ತಪ್ಪಿಸಲು ಮಾಸ್ಕ್ ಬಳಸಬೇಕು.
  6. ನಿಮ್ಮ ಕೈಗಳಿಂದ ಬಾಯಿ, ಕಣ್ಣು ಅಥವಾ ಮೂಗು ಮುಟ್ಟಬೇಡಿ.
  7. ನಿಮ್ಮ ಸುತ್ತಲಿನ ಕೆಲಸದ ಪ್ರದೇಶಗಳನ್ನು ಸೋಂಕುರಹಿತಗೊಳಿಸಿ.


ಯುವ, ಆರೋಗ್ಯವಂತ ವ್ಯಕ್ತಿಗಳು (ರೋಗಲಕ್ಷಣಗಳನ್ನು ವರದಿ ಮಾಡುವುದು, ಸಂಪರ್ಕತಡೆಯನ್ನು ಸೂಚಿಸುವುದು ಇತ್ಯಾದಿ) ತೆಗೆದುಕೊಳ್ಳುವ ಕ್ರಮಗಳು ಸಮಾಜದಲ್ಲಿರುವ ಅತ್ಯಂತ ದುರ್ಬಲರನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಕರೊನಾ ವಿರುದ್ದ ನಾವೆಲ್ಲರೂ ಒಟ್ಟಾಗಿ ಹೋರಾಡಬೇಕಿದೆ ಏಕೆಂದರೆ, "ದೊಡ್ಡ ಜವಾಬ್ದಾರಿಯೊಂದಿಗೆ, ದೊಡ್ಡ ಶಕ್ತಿ ಬರುತ್ತದೆ."


ನನಗೆ ಕೋವಿಡ್-19 ಇದೆ ಎಂದು ಹೇಗೆ ತಿಳಿಯುವುದು?

ಪ್ರಸ್ತುತ ಭಾರತದಲ್ಲಿ, ಪ್ರಮಾಣೀಕೃತ ಲ್ಯಾಬ್‌ಗಳು ಮಾತ್ರ ವೈರಸ್‌ಗಾಗಿ ಪರೀಕ್ಷಿಸಬಲ್ಲವು. ಈಗ ಅನೇಕ ವಿಮಾನ ನಿಲ್ದಾಣಗಳು ಜ್ವರವನ್ನು ಸ್ಕ್ಯಾನ್ ಮಾಡಬಹುದು ಮತ್ತು ಆರ್‌ಟಿ ಪಿಸಿಆರ್ ಪರೀಕ್ಷೆಯನ್ನು ಸಹ ಮಾಡಬಹುದು. ನಿಮ್ಮಲ್ಲಿ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಗಳ ಲಕ್ಷಣಗಳಿದ್ದರೆ, ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು.


ಕೋವಿಡ್-19 ಬಗ್ಗೆ ಖುಷಿಪಡುವ ಸಂಗತಿಯೆಂದರೆ, ಮೊದಲ ಎರಡು ತಿಂಗಳಲ್ಲೆ ಈ ವೈರಸ್ ಅನ್ನು ಅನುಕ್ರಮಗೊಳಿಸಲಾಯಿತು ಮತ್ತು ಸಾಧ್ಯವಾದಷ್ಟು ಬೇಗ ರೋಗನಿರ್ಣಯವನ್ನು ಮಾಡಲಾಯಿತು. ಇದು ಮೊದಲಿಗಿಂತ ಹೆಚ್ಚು ವೇಗವಾಗಿ ಲಸಿಕೆ ಪಡೆಯುವ ಭರವಸೆಯನ್ನು ನೀಡುತ್ತದೆ.


ನೀವು ಮಧುಮೇಹ, ಹೃದಯ ರೋಗಗಳು ಮತ್ತು ಇತ್ಯಾದಿಗಳಿಂದ ಬಳಲುತ್ತಿದ್ದರೆ ಸೋಂಕಿನ ಅಪಾಯ ಮತ್ತು ರೋಗದ ತೀವ್ರತೆಯೂ ಹೆಚ್ಚಿರುತ್ತದೆ.

ಮುಗಿಸುವ ಮುನ್ನ

ಆರೋಗ್ಯವು ನಮ್ಮಲ್ಲಿರುವ ಪ್ರಮುಖ ಆಸ್ತಿಯಾಗಿದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮತ್ತು ಬಲವಾದ ರೋಗನಿರೋಧಕ ಶಕ್ತಿಯೊಂದಿಗೆ ನಮ್ಮನ್ನು ಆರೋಗ್ಯವಾಗಿರಿಸಿಕೊಳ್ಳುವುದು ಹೆಚ್ಚಿನ ರೋಗಗಳಿಗೆ ಸಾಧ್ಯವಾದಷ್ಟು ಉತ್ತಮವಾದ ರಕ್ಷಣೆಯಾಗಿದೆ.


ಎರಡನೆಯ ಪ್ರಮುಖ ವಿಷಯವೆಂದರೆ ನಮ್ಮ ಪರಿಸರ ಮತ್ತು ಪ್ರಕೃತಿಯನ್ನು ಸಾಮಾನ್ಯವಾಗಿ ಗೌರವಿಸುವುದನ್ನು ಕಲಿಯುವುದು, ಇದರಿಂದ ನಾವು ಪರಿಸರ ವ್ಯವಸ್ಥೆಯ ಭಾಗವಾಗಿದ್ದೇವೆ ಮತ್ತು ಅದನ್ನು ನಿಯಂತ್ರಿಸುವುದಿಲ್ಲ ಎಂಬುದನ್ನು ತಿಳಿಯಬೇಕಾಗಿದೆ. ಪ್ರಕೃತಿ ಯಾವಾಗಲೂ ನಮಗಿಂತ ಕೆಲವು ಹೆಜ್ಜೆ ಮುಂದಿರುತ್ತದೆ. ಆದ್ದರಿಂದ ನಾವು ಪ್ರಕೃತಿಯನ್ನು ಗೌರವಿಸಲು ಕಲಿಯಬೇಕು.