2 ವರ್ಷದಲ್ಲಿ ಡೈರಿ ಕೃಷಿಯಿಂದ 2 ಕೋಟಿ ಸಂಪಾದಿಸಿದ ಬರಹಗಾರರು ಮತ್ತು ಉದ್ಯೋಗಿಯಾಗಿರುವ ಸಂತೋಷ್ ಶರ್ಮಾ

2007 ರಲ್ಲಿ ಏರ್ ಇಂಡಿಯಾದಲ್ಲಿ ಹೆಚ್ಚಿನ ಸಂಬಳ ಪಡೆಯುವ ಮೊದಲು ಸಂತೋಷ್ ಶರ್ಮಾರವರು ಹಲವಾರು ಕೆಲಸಗಳನ್ನು ಮಾಡಿದ್ದರು. ಎಪಿಜೆ ಅಬ್ದುಲ್ ಕಲಾಂ ಅವರನ್ನು ಭೇಟಿಯಾಗುವ ಅವಕಾಶ ಸಿಗುವ ಮೊದಲು ಏರ್ ಇಂಡಿಯಾದಲ್ಲಿ ಕೆಲವು ವರ್ಷಗಳ ಕಾಲ ಅದರ ಕೋಲ್ಕತಾ ಶಾಖೆಯ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದರು.

2 ವರ್ಷದಲ್ಲಿ ಡೈರಿ ಕೃಷಿಯಿಂದ 2 ಕೋಟಿ ಸಂಪಾದಿಸಿದ ಬರಹಗಾರರು ಮತ್ತು ಉದ್ಯೋಗಿಯಾಗಿರುವ ಸಂತೋಷ್ ಶರ್ಮಾ

Sunday September 08, 2019,

2 min Read

ಭಾರತದ ಮಾಜಿ ರಾಷ್ಟ್ರಪತಿಗಳೊಂದಿಗಿನ ಭೇಟಿಯು ಸಂತೋಷ್‌ರನ್ನು ಉದ್ಯಮಶೀಲತೆಯ ಕಡೆಗೆ ಪರಿವರ್ತಿಸಿತು. ಕೇವಲ ಎಂಟು ದನಗಳೊಂದಿಗೆ ಎಮ್'ಮಾ ಡೈರಿ ಫಾರ್ಮ್ ಅನ್ನು 2014 ರಲ್ಲಿ ಪ್ರಾರಂಭಿಸಿದರು ಮತ್ತು ಅಲ್ಪಾವಧಿಯಲ್ಲಿಯೇ 2 ಕೋಟಿ ರೂಪಾಯಿ ಆದಾಯ ಸಂಪಾದಿಸಿದರು.


ಚಿತ್ರ: (ಎಡ) - ಫೇಸ್‌ಬುಕ್ ; (ಬಲ) - ಕೆಜೆ


ಸಂತೋಷ್ ರವರು ಜಾರ್ಖಂಡ್‌ನ ಜಮಶೇದ್ಪುರದ ಮಧ್ಯಮ ವರ್ಗ ಕುಟುಂಬದಲ್ಲಿ ಜನಿಸಿದರು. ಇದು ಅವರಿಗೆ ಜೀವನದಲ್ಲಿ ಹೆಚ್ಚಿನ ಎತ್ತರವನ್ನು ಸಾಧಿಸಲು ಶ್ರಮಿಸಬೇಕೆಂದು ಪ್ರೇರೇಪಿಸಿತು ಮತ್ತು ಅದೇ ಸಮಯದಲ್ಲಿ, ಅವರು ಸಮಾಜಕ್ಕೆ ಕೊಡುಗೆ ನೀಡುವುದರ ಬಗ್ಗೆಯೂ ಉತ್ಸುಕರಾಗಿದ್ದರು. ಅದಕ್ಕಾಗಿಯೇ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ ನಂತರ ಅವರು ನಾಗರಿಕ ಸೇವಾ ಪರೀಕ್ಷೆಗಳಿಗೆ ಅಧ್ಯಯನ ಮಾಡಲು ಪ್ರಾರಂಭಿಸಿದರು. ಆದಾಗ್ಯೂ, ಅವರು ಅಂತಿಮವಾಗಿ ಅಧ್ಯಯನವನ್ನು ತ್ಯಜಿಸಿ ಮತ್ತೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಲು ಹಿಂತಿರುಗಿದರು.


ಒಂದು ದಶಕದ ಹಿಂದೆ ಅಬ್ದುಲ್ ಕಲಾಂ ಅವರನ್ನು ಭೇಟಿಯಾದಾಗ ಸಮಾಜಕ್ಕೆ ಸಹಾಯ ಮಾಡುವ ಅವಕಾಶ ಅನಿರೀಕ್ಷಿತವಾಗಿ ಒದಗಿ ಬಂತು. ಕಲಾಂ ರವರು ಸಂತೋಷ್‌ಗೆ ತನ್ನ ಡೈರಿ ಫಾರ್ಮ್‌ನೊಂದಿಗೆ ಉದ್ಯಮಿಯಾಗಲು ಮಾತ್ರವಲ್ಲ, ಯುವಜನರ ಜೀವನದ ಮೇಲೆ ಅರ್ಥಪೂರ್ಣ ರೀತಿಯಲ್ಲಿ ಪರಿಣಾಮ ಬೀರುವ ಹಾದಿಯನ್ನು ತೋರಿಸಿದರು.


ಕೆಜೆ ಯ ಪ್ರಕಾರ, ಸಂತೋಷ್ ರವರು 2014 ರಲ್ಲಿ ಗಣರಾಜ್ಯೋತ್ಸವದ ಹಿಂದಿನ ದಿನದಂದು ಜಾರ್ಖಂಡ್‌ನ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾದ ಡಾಲ್ಮಾದಲ್ಲಿ ಎಮ್'ಮಾ ಡೈರಿ ಫಾರ್ಮ್ ಅನ್ನು ಪ್ರಾರಂಭಿಸಿದರು. ಸಂತೋಷ್ ರವರು ತಮ್ಮ ಜೀವನದಲ್ಲಿ ಉಳಿಸಿದ ಎಲ್ಲ ಹಣವನ್ನು ಜಮೀನಿನಲ್ಲಿ ಹೂಡಿಕೆ ಮಾಡಿದರು ಮತ್ತು ಎಂಟು ದನಗಳನ್ನು ಖರೀದಿಸಿದರು. ಕಡಿಮೆ ಅವಧಿಯಲ್ಲಿ ಅವರು 2 ಕೋಟಿ ರೂ. ಆದಾಯವನ್ನು ಗಳಿಸಿದ್ದಾರೆ ಮತ್ತು ಸಾವಯವ ಕೃಷಿಯನ್ನು ಸಹ ಪ್ರಾರಂಭಿಸಿದ್ದಾರೆ.


ಈ ಮೂಲಕ ಸಂತೋಷ್ ರವರು ಸಮಾಜದ ಅರ್ಹ ಮತ್ತು ಅಂಚಿನಲ್ಲಿರುವ ವರ್ಗಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದ್ದಾರೆ. ದ ಟೆಲಿಗ್ರಾಫ್‌ಗೆ ತಮ್ಮ ಕೆಲಸದ ಬಗ್ಗೆ ಮಾತನಾಡುತ್ತಾ ಹೀಗೆ ಹೇಳಿದರು,


"ನಮ್ಮದು ಒಂದು ಪ್ರಾಯೋಗಿಕ ಯೋಜನೆಯಾಗಿದ್ದು, ಸರ್ಕಾರಿ ಮತ್ತು ಖಾಸಗಿ ವಲಯಗಳಿಂದ ನಿರ್ಲಕ್ಷಿಸಲ್ಪಟ್ಟ ನಿರುದ್ಯೋಗಿ ಯುವಕರಿಗೆ ಇದನ್ನು ನಿರ್ವಹಿಸಬಲ್ಲ ಕಾರ್ಯ ಮಾದರಿಯಾಗಿ ಇತರ ಜಿಲ್ಲೆಗಳಲ್ಲಿ ಮರುಜಾರಿಗೊಳಿಸಬಹುದು."


ಪೂರ್ಣ ಸಮಯದ ಉದ್ಯಮಿಯಾಗಿದ್ದರೂ, ಸಂತೋಷ್ ರವರು ಬರೆಯಲು ಸಮಯವನ್ನು ಕಂಡುಕೊಳ್ಳುತ್ತಾರೆ ಅದಲ್ಲದೆ ಪ್ರೇರಕ ಭಾಷಣಕಾರರು ಕೂಡ ಆಗಿದ್ದಾರೆ. ಇಲ್ಲಿಯವರೆಗೆ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ ಮತ್ತು ಸ್ಟಾರ್ ಸಿಟಿಜನ್ ಹಾನರ್ ಪ್ರಶಸ್ತಿ, ಟಾಟಾದ ಅಲಂಕಾರ್ ಪ್ರಶಸ್ತಿ, ಯುವ ಐಕಾನ್ ಪ್ರಶಸ್ತಿ ಸೇರಿದಂತೆ ಜಾರ್ಖಂಡ್ ಸರ್ಕಾರದಿಂದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.