Brands
Discover
Events
Newsletter
More

Follow Us

twitterfacebookinstagramyoutube
Kannada

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ಮಹಾತ್ಮ ಗಾಂಧೀಜಿಯವರು ಕಂಡ ಭವ್ಯ ಭಾರತದ ಕನಸು

ಗಾಂಧೀಜಿಯವರು ಬ್ರಿಟಿಷರ ವಿರುದ್ಧದ ಹೋರಾಟದ ಹೊರತಾಗಿಯೂ, ಉಜ್ವಲ ಭಾರತಕ್ಕಾಗಿ ರಾಮರಾಜ್ಯ, ಹಳ್ಳಿಗಳ ಅಭಿವೃದ್ಧಿ, ಅಸ್ಪೃಶ್ಯತೆಯ ವಿರುದ್ಧ ತಮ್ಮನ್ನು ತೊಡಗಿಸಿಕೊಂಡಿದ್ದರು.

ಮಹಾತ್ಮ ಗಾಂಧೀಜಿಯವರು ಕಂಡ ಭವ್ಯ ಭಾರತದ ಕನಸು

Monday September 30, 2019,

2 min Read

ಗಾಂಧಿ ರಾಮರಾಜ್ಯ

ತಮ್ಮ ಜೀವನದುದ್ದಕ್ಕೂ ಶಾಂತಿಯನ್ನು ಪ್ರತಿಪಾದಿಸಿದ್ದ ಗಾಂಧೀಜಿಯವರು, ಸ್ವಾತಂತ್ರ್ಯ ನಂತರ ರಾಮರಾಜ್ಯದ ಬಗ್ಗೆ ಕನಸು ಕಂಡಿದ್ದರು. ಗಾಂಧೀಜಿಯವರ ಪ್ರಕಾರ ರಾಮರಾಜ್ಯ ಎಂದರೆ ಹಿಂದೂರಾಜ್ಯವಾಗಿರದೆ ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುವ ಸಮಾನತೆಯನ್ನು ಸಾರುವ ಸಮಾಜವಾಗಿತ್ತು. ಇಲ್ಲಿ ರಾಜ ಮತ್ತು ಪ್ರಜೆಗಳ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ, ಒಬ್ಬ ಸಾಮಾನ್ಯ ನಾಗರಿಕನು ತನಗೆ ಸಿಗಬೇಕಾದ ನ್ಯಾಯವನ್ನು ತ್ವರಿತವಾಗಿ ದೊರಕಿಸಿಕೊಳ್ಳಬಹುದು.

ಹಳ್ಳಿಗಳಲ್ಲಿದೆ ಭವಿಷ್ಯ

ಅತೀ ಮುಖ್ಯವಾಗಿ ಗಾಂಧೀಜಿಯವರು ಪ್ರತಿ ಹಳ್ಳಿಗಳು ಸ್ವಾವಲಂಬಿಗಳಾಗಬೇಕೆಂದು ಭಾರತದ ಭವಿಷ್ಯವು ಹಳ್ಳಿಗಳಲ್ಲಿ ಅಡಗಿದೆ ಎಂದು ನಂಬಿದ್ದರು. ರಾಜಕೀಯ ಮತ್ತು ಆರ್ಥಿಕ ಪ್ರಜಾಪ್ರಭುತ್ವವನ್ನು ತಳಮಟ್ಟದಲ್ಲಿ ಪ್ರಾರಂಭಿಸಲು ಅತ್ಯಂತ ಸೂಕ್ತವಾದ ಸಾಧನವೆಂದರೆ ಪಂಚಾಯತ್ ರಾಜ್ ವ್ಯವಸ್ಥೆ. ಮಹಾತ್ಮ ಗಾಂಧಿಯವರ ದೇಶಾದ್ಯಂತದ ಪ್ರವಾಸಗಳು "ಸರಳ ಜೀವನ ಮತ್ತು ಉನ್ನತ ಚಿಂತನೆಯ" ಮೂಲವನ್ನು ಆಧರಿಸಿ ಹಳ್ಳಿಗಳನ್ನು ಗ್ರಾಮ ಪಂಚಾಯಿತಿಗಳು ನಿಯಂತ್ರಿಸಿದರೆ ಭಾರತಕ್ಕೆ ಲಾಭವಾಗುತ್ತದೆ ಎಂಬ ಅವರ ನಂಬಿಕೆಯನ್ನು ಬಲಪಡಿಸುತ್ತವೆ.


ಭಾರತದ ರಾಜಕೀಯ ವ್ಯವಸ್ಥೆಯ ಅಡಿಪಾಯವಾಗಿ ಪ್ರತಿ ಗ್ರಾಮವು ತನ್ನದೇ ಆದ ವ್ಯವಹಾರಗಳಿಗೆ ಜವಾಬ್ದಾರರಾಗಿರುವ ವಿಕೇಂದ್ರೀಕೃತ ಸರ್ಕಾರವಾದ ಪಂಚಾಯತ್ ರಾಜ್ ಅನ್ನು ಮಹಾತ್ಮ ಗಾಂಧಿ ಪ್ರತಿಪಾದಿಸಿದರು.


ಗ್ರಾಮಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಿಂದ, ಹಳ್ಳಿಗಳಲ್ಲಿ ಬದುಕುವವರ ಜೀವನ ಶೈಲಿಯನ್ನು ಉನ್ನತ ಮಟ್ಟಕ್ಕೇರಿಸುವುದಾಗಿತ್ತು. ಇದರ ಸಲುವಾಗಿ ಮಹಾತ್ಮ ಗಾಂಧಿಯವರು ಇಡೀ ದೇಶವನ್ನು ಹಲವಾರು ಬಾರಿ ಸುತ್ತಾಡಿದರು ಮತ್ತು ಅವರ ಜೀವನ ಪರಿಸ್ಥಿತಿಗಳನ್ನು ಮತ್ತು ಬಡತನದ ಕಾರಣಗಳನ್ನು ಅರ್ಥಮಾಡಿಕೊಂಡರು. ನಿರುದ್ಯೋಗದ ದಿನಗಳು ಭಾರತದಲ್ಲಿನ ಗ್ರಾಮೀಣ ಬಡತನಕ್ಕೆ ಕಾರಣವೆಂದು ಗುರುತಿಸಿದ್ದಾರೆ. ಅವರ ಪ್ರಕಾರ ಗ್ರಾಮೀಣ ಜನರಲ್ಲಿ ಒಂದು ವರ್ಷದಲ್ಲಿ ಸುಮಾರು 4 ತಿಂಗಳು ಅಥವಾ 120 ದಿನಗಳವರೆಗೆ ನಿರುದ್ಯೋಗಿಗಳಾಗಿರುತ್ತಾರೆ. ನಿರುದ್ಯೋಗದ ಆ ಅವಧಿಯಲ್ಲಿ ಸುಮಾರು 85 ಪ್ರತಿಶತದಷ್ಟು ಗ್ರಾಮೀಣ ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಅವರು ಪರಿಗಣಿಸಿದ್ದರು. ಕೃಷಿಕರು ತಮ್ಮ ಒಡೆತನದ ಅವಧಿಯಲ್ಲಿ ಅಗತ್ಯವಾದ ಹೆಚ್ಚುವರಿ ಉದ್ಯೋಗವನ್ನು ಮಾಡಲು ಯಾವುದೇ ಅವಕಾಶವಿಲ್ಲದ ಕಾರಣ, ಪರ್ಯಾಯವನ್ನು ಹುಡುಕಬೇಕಾಗಿತ್ತು.


ಮಹಾತ್ಮ ಗಾಂಧೀಯವರು ಎರಡು ಮೂಲ ನಿರ್ಬಂಧಗಳನ್ನು ಇಟ್ಟುಕೊಂಡು ನಿರುದ್ಯೋಗಿ ಗ್ರಾಮೀಣ ಜನತೆಗೆ ಕೃಷಿಯ ಒಡೆತನದ ಅವಧಿಯಲ್ಲಿ ಉದ್ಯೋಗ ಸಂಪಾದಿಸುವ ಸಾಧನವಾಗಿ ನೂಲುವ ಚಕ್ರವನ್ನು ಪ್ರಸ್ತಾಪಿಸಿದರು.


ನೂಲುವ ಚಕ್ರವು ಜನರಿಗೆ ಉದ್ಯೋಗ ಒದಗಿಸುವುದಲ್ಲದೆ, ಉನ್ನತ ಆಲೋಚನೆಯೊಂದಿಗೆ ಸರಳ ಜೀವನವನ್ನು ನಡೆಸಲು ಮನುಷ್ಯರನ್ನು ಒಟ್ಟು ಮಾಡುತ್ತದೆ ಎಂದಿದ್ದರು. ಅದಲ್ಲದೇ ಅದರಲ್ಲಿ 3 ಸಂದೇಶಗಳನ್ನು ಕಂಡುಕೊಂಡಿದ್ದರು


  • ಆರ್ಧಿಕ ಸಂದೇಶ
  • ಸಾಂಸ್ಕೃತಿಕ ಸಂದೇಶ
  • ಮಾನವೀಯ ಸಂದೇಶ

ಅಸ್ಪೃಶ್ಯತೆಯ ವಿರೋಧಿ

ಗಾಂಧೀಜಿಯವರು ಅಸ್ಪೃಶ್ಯತೆಯ ಪದ್ದತಿಯ ವಿರುದ್ದದ ಹೋರಾಟವನ್ನು ತಮ್ಮ ಹನ್ನೆರಡನೇ ವಯ್ಯಸ್ಸಿನಲ್ಲಿಯೇ ಪ್ರಾರಂಭಿಸಿದ್ದರು, ಅವರ ಮನೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಉಕಾ ಎನ್ನುವ ವ್ಯಕ್ತಿಯೊಬ್ಬ ಬರುತ್ತಿದ್ದ, ಅವನನ್ನು ಮುಟ್ಟಬಾರದು ಎಂದು ಅವರ ತಾಯಿ ನಿಷೇಧ ಹೇರಿದ್ದರು. ಅವರು ಅದರ ವಿರುದ್ಧ ಪ್ರತಿಭಟಿಸಿದ್ದರು ಮತ್ತು ಅವರ ಅಮ್ಮನಿಗೆ ಇದರ ಬಗ್ಗೆ ತಿಳಿ ಹೇಳಿದ್ದರು.


ಹಿಂದೂ ಸಮಾಜವನ್ನು ಅದರ ಅನಿಷ್ಠಗಳಿಂದ ಮತ್ತು ಅಸ್ಪೃಶ್ಯತೆಗೆ ಒಳಗಾದ ವರ್ಗಗಳನ್ನು ಅದರಿಂದ ಹೊರ ತರುವುದರ ಬಗ್ಗೆ ಅವರು ದೀರ್ಘಕಾಲ ಯೋಚಿಸಿದ್ದರು.


ಮಹಾತ್ಮಾ ಗಾಂಧೀಜಿಯವರ ಪ್ರಕಾರ,


"ಜಾತಿ ವ್ಯವಸ್ಥೆಯು ಒಂದು ಅಡಚಣೆಯಾಗಿದೆ, ಆದರೆ ಪಾಪವಲ್ಲ. ಆದರೆ ಅಸ್ಪೃಶ್ಯತೆಯು ಪಾಪ ಮತ್ತು ದೊಡ್ಡ ಅಪರಾಧ, ಸಮಯವಿರುವಾಗಲೇ ಹಿಂದೂ ಧರ್ಮವು ಈ ಸರ್ಪವನ್ನು ನಾಶ ಮಾಡದಿದ್ದರೆ, ಅದು ಹಿಂದೂ ಧರ್ಮವನ್ನು ತಿಂದುಹಾಕುತ್ತದೆ."

ಅಂತಿಮವಾಗಿ ಅಸ್ಪೃಶ್ಯತೆಯನ್ನು ತೆಗೆದುಹಾಕುವುದು ಲಕ್ಷಾಂತರ ಹಿಂದೂಗಳ ಮನಸ್ಸಿನ ಬದಲಾವಣೆಯ ಮೇಲೆ ಅವಲಂಬಿತವಾಗಿದೆ ಎಂದು ಅವರು ಬಲವಾಗಿ ನಂಬಿದ್ದರು.