ಪರಿಸರಪೂರಕ ಕೃಷಿಯನ್ನು ಉತ್ತೇಜಿಸಲು ಯುವಕರನ್ನು 'ಗ್ರೀನ್ ಕಮಾಂಡೋ'ಗಳನ್ನು ರೂಪಿಸುತ್ತಿರುವ ರೈತ ಸಮೀರ್ ಬೋರ್ಡೊಲೊಯ್

ಸ್ಥಳೀಯ ಆಹಾರ ಪದ್ಧತಿಯನ್ನು ಬಳಸಿಕೊಂಡು ನಗರ-ಗ್ರಾಮೀಣ ಭಾಗದಲ್ಲಿ ಕೃಷಿಯನ್ನು ಉತ್ತೇಜಿಸುವ ಮಹತ್ವಾಕಾಂಕ್ಷೆ ಯೋಜನೆಯೊಂದಕ್ಕೆ ರೈತ ಸಮೀರ್ ಬೋರ್ಡೊಲೊಯ್ ಚಾಲನೆ ನೀಡಿದ್ದಾರೆ.

ಪರಿಸರಪೂರಕ ಕೃಷಿಯನ್ನು ಉತ್ತೇಜಿಸಲು ಯುವಕರನ್ನು 'ಗ್ರೀನ್ ಕಮಾಂಡೋ'ಗಳನ್ನು ರೂಪಿಸುತ್ತಿರುವ ರೈತ ಸಮೀರ್ ಬೋರ್ಡೊಲೊಯ್

Saturday November 09, 2019,

3 min Read

ಪರಿಸರಕ್ಕೆ ಹಾನಿಕಾರಕ ಮತ್ತು ಪೂರಕವಲ್ಲದ ಕೃಷಿ ಪದ್ಧತಿಗಳ ಪರಿಣಾಮವಾಗಿ ಭಾರತದ ಈಶಾನ್ಯ ಪ್ರದೇಶವು (ಎನ್‌ಇಆರ್) ಹೆಚ್ಚಿದ ಆಹಾರ ಅಭದ್ರತೆಯ ಸಮಸ್ಯೆಯನ್ನು ಎದುರಿಸುತ್ತಿದೆ. ದಶಕಗಳ ಜನಾಂಗೀಯ ರಾಜಕೀಯ ಸಂಘರ್ಷ, ಪ್ರದೇಶದ ಜೀವವೈವಿಧ್ಯತೆಗೆ ಪ್ರತಿಕೂಲವಾದ ವಿಧಾನ, ಮತ್ತು ಪ್ರದೇಶದ ‘ಹಿಂದುಳಿದಿರುವಿಕೆ’ ಯ ಪೂರ್ವಭಾವಿ ಕಲ್ಪನೆಗಳು ನೈಸರ್ಗಿಕ ಸಂಪನ್ಮೂಲಗಳ ಮತ್ತು ಅವುಗಳನ್ನು ಅವಲಂಬಿಸಿರುವ ಸಮುದಾಯಗಳ ಅಪಾರ ಶೋಷಣೆಗೆ ಕಾರಣವಾಗಿವೆ. ಮಧ್ಯದಲ್ಲಿ ಸಿಕ್ಕಿಬಿದ್ದವರು ಈ ಪ್ರದೇಶದ ಯುವಕರು, ತಮ್ಮ ಭೂಮಿ ಮತ್ತು ಪರಂಪರೆಯಿಂದ ಸಂಪರ್ಕ ಕಡಿತಗೊಂಡಿದ್ದಾರೆ ಮತ್ತು ಈಗಿನ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ.


ರೈತ ಸಮುದಾಯಗಳು ಮತ್ತು ಯುವಕರ ನಡುವೆ ಸಂಪರ್ಕವನ್ನು ಕಲ್ಪಿಸುವ ಉದ್ದೇಶದಿಂದ ಸಮೀರ್ ಬೋರ್ಡೊಲೊಯ್ ಅವರು ಗ್ರೀನ್ ಕಮಾಂಡೋಸ್ ಕಾರ್ಯಕ್ರಮವನ್ನು ತಮ್ಮ ಸಂಸ್ಥೆ ಸ್ಪ್ರೆಡ್ ಎನ್ಇ (ಸೊಸೈಟಿ ಫಾರ್ ದಿ ಪ್ರಮೋಷನ್ ಆಫ್ ರೂರಲ್ ಎಕಾನಮಿ ಅಂಡ್ ಅಗ್ರಿಕಲ್ಚರಲ್ ಡೆವಲಪ್ಮೆಂಟ್, ಈಶಾನ್ಯ) ಮೂಲಕ ರಚಿಸಿದರು. ಸ್ಪ್ರೆಡ್ ಎನ್ ಇ ಎಂಬುದು ಕಡಿಮೆ-ವೆಚ್ಚದ ಮತ್ತು ಸಾವಯವ ಕೃಷಿಕರನ್ನು ಒಳಗೊಂಡ ಸಮುದಾಯವಾಗಿದ್ದು, ಅವರು ರೈತರ ಘನತೆ, ಮತ್ತು ರೈತರ ಸಾಂಸ್ಥಿಕ ಒಳಗೊಳ್ಳುವಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.


ರೈತ ಸಮೀರ್ ಬೋರ್ಡೊಲೊಯ್


ಮೊದಲಿನಿಂದಲೂ ರೈತ

ಸಮೀರ್ ಬೋರ್ಡೋಲಾಯ್ ಅವರನ್ನು ಎನ್ಇಆರ್ ನಲ್ಲಿ ‘ಫಾರ್ಮರ್ ಸಮೀರ್ ಬೋರ್ಡೊಲೊಯ್’ ಎಂದು ವ್ಯಾಪಕವಾಗಿ ಗುರುತಿಸಲಾಗಿದೆ. ಅರುಣಾಚಲ ಪ್ರದೇಶದ ಐಎಎಸ್ ಅಧಿಕಾರಿಯ ಮಗನಾದ, ಸಮೀರ್ ಅವರ ಅತ್ಯುತ್ತಮ ನೆನಪುಗಳೆಲ್ಲವೂ ತವಾಂಗ್ ಮತ್ತು ಸುತ್ತಮುತ್ತಲಿನ ಪ್ರಕೃತಿ ಮತ್ತು ಕೃಷಿಯೊಂದಿಗಿವೆ.


ಅಸ್ಸಾಂ ಕೃಷಿ ವಿಶ್ವವಿದ್ಯಾಲಯದಲ್ಲಿ ರಾಸಾಯನಿಕ ಕೃಷಿಯನ್ನು ಅಧ್ಯಯನ ಮಾಡುವುದು ಅವರಿಗೆ ಮೆಚ್ಚಿನ ಆಯ್ಕೆಯಾಗಿತ್ತು, ನಂತರ ಅವರು ಕೃಷಿ ಸಮುದಾಯಗಳೊಂದಿಗೆ ನಿಕಟ ಮತ್ತು ನೇರ ಸಂಬಂಧವನ್ನು ಹೊಂದಿರುವ ಕೆಲಸವನ್ನು ಕೈಗೊಂಡರು. ಈ ಆರಂಭಿಕ ಅನುಭವದ ಸಮಯದಲ್ಲಿ ಅವರು ಕೃಷಿ ಸಮುದಾಯಗಳ ಮೇಲೆ ಮೊನೊ-ಕ್ರಾಪಿಂಗ್ ನಿಂದ ಉಂಟಾಗುವ, ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಅಪಾಯಕಾರಿ ಪರಿಣಾಮವನ್ನು ಕಂಡರು. ಸಾವಯವ ಕೃಷಿಯನ್ನು ಉತ್ತೇಜಿಸಲು ಮತ್ತು ಭಾರತದ ಅನೇಕ ರೈತರಿಗೆ ಗೌರವಯುತ, ಮಹತ್ವಾಕಾಂಕ್ಷೆಯ, ಆರೋಗ್ಯಕರ ಮತ್ತು ನ್ಯಾಯಸಮ್ಮತವಾದ ರೀತಿಯಲ್ಲಿ ಸೇವೆ ಸಲ್ಲಿಸಲು ರೈತ ಸಮೀರ್ ಬದ್ಧರಾದರು.


ಹೊಸ ಹೆಜ್ಜೆ

ತಮ್ಮ ಸಂಶೋಧನೆಯ ಪರಿಣಾಮವಾಗಿ 2005 ರಲ್ಲಿ, ಸಮೀರ್ ರೈತರಿಗೆ ತಮ್ಮ ಸಸ್ಯಗಳ ಬಗ್ಗೆ ರೋಗನಿರೋಧಕ ಪರಿಹಾರಗಳನ್ನು ಒದಗಿಸುವ ಉದ್ದೇಶದಿಂದ ಅಸ್ಸಾಂನ ಜೋರ್ಹತ್‌ನಲ್ಲಿ ‘ಸಸ್ಯ ಆರೋಗ್ಯ ಚಿಕಿತ್ಸಾಲಯ’ ಸ್ಥಾಪಿಸಿದರು. ತಮ್ಮ ಚಿಕಿತ್ಸಾಲಯಕ್ಕೆ ಭೇಟಿ ನೀಡಲು ಯಾರೂ ಬರದಿರುವುದನ್ನು ಗಮನಿಸಿದಾಗ, ಅವರು ತಾವೇ ಸಾಕಣೆ ಕೇಂದ್ರಗಳಿಗೆ ಭೇಟಿಕೊಟ್ಟು ಸಮುದಾಯಗಳಿಗೆ ಸಲಹೆ, ಸಾವಯವ ಕೃಷಿಯ ಅಗತ್ಯ ಮತ್ತು ಸಾವಯವ ಕೃಷಿಯತ್ತ ಸಾಗಲು ಪರಿಹಾರಗಳನ್ನು ನೀಡಿದರು.


ಈ ಪ್ರಯಾಣದ ಆರಂಭದಲ್ಲಿ, ರೈತ ಸಮೀರ್ ಕೆನಡಾದ ಸ್ವಯಂಸೇವಕ ಮತ್ತು ಸ್ಥಳೀಯ ಎನ್‌ಜಿಒ ನ ಸದಸ್ಯ ಹಾಗೂ ಅಲ್ಲಿನ ಫಲವತ್ತಾದ ಮೈದಾನದ ಸಂಯೋಜಕರಾದ ಪೆಗ್ಗಿ ಕಾರ್ಸ್‌ವೆಲ್ ಅವರನ್ನು ಭೇಟಿಯಾದರು. ಅವರೊಂದಿಗೆ ಭೇಟಿಯಾಗಿ ಸಾವಯವ ಕೃಷಿಯಲ್ಲಿ ಕಡಿಮೆವೆಚ್ಚವನ್ನು ಬಳಸಿ ರೈತರಿಗೆ ಅನುಕೂಲ ಮಾಡಿಕೊಡುವಂತ ಅನ್ವೇಷಣೆಗಳನ್ನು ಕೈಗೊಂಡರು.


ಪರಿಶೋಧನೆ ಮತ್ತು ಹೊಸಸೃಷ್ಟಿಯ ಪಯಣದಲ್ಲಿ ತೊಡಗಿರುವ ರೈತ ಸಮೀರ್, ರೈತರು ತಮ್ಮ ಭೂಮಿ ಮತ್ತು ಸುತ್ತಮುತ್ತಲಿನ ಪರಿಸರವನ್ನು ಶೂನ್ಯ-ವೆಚ್ಚದ ಸಾವಯವ ಕೃಷಿಯನ್ನು ಕೈಗೊಳ್ಳಲು ಬಳಸುವ ವಿಧಾನಗಳನ್ನು ನವೀಕರಿಸಲು ಪ್ರಾರಂಭಿಸಿದರು. ಅದೇ ಸಮಯದಲ್ಲಿ, ಭೂಮಿ, ಕೃಷಿ, ಪ್ರಕೃತಿ ಮತ್ತು ಸಾಗುವಳಿ ನಡುವೆ ಸಂಪರ್ಕ ಕಲ್ಪಿಸುವುದಕ್ಕಾಗಿ ಯುವಕರ ಪ್ರಬಲ ಸಾಮರ್ಥ್ಯ ಮತ್ತು ಮಹತ್ವವನ್ನು ಅವರು ತಮ್ಮ ಅನುಭವದ ಮೂಲಕ ಅರ್ಥಮಾಡಿಕೊಂಡರು. ಕೃಷಿ ಪದ್ಧತಿಗಳನ್ನು ಸಾವಯವ, ಕಡಿಮೆ-ವೆಚ್ಚದ ಮತ್ತು ಪರಿಸರ ಸ್ನೇಹಿ ವಿಧಾನಗಳತ್ತ ಪರಿವರ್ತಿಸುವಲ್ಲಿ ಯುವಕರು ಪ್ರಮುಖ ಪಾತ್ರ ವಹಿಸಬಹುದೆಂದು ಸಮೀರ್ ಅರಿತುಕೊಂಡರು, ಇದರಿಂದಾಗಿ ಮುಂದಿನ ಪೀಳಿಗೆಗೆ ಕೃಷಿಯು ಮತ್ತೆ ಮಹತ್ವಾಕಾಂಕ್ಷೆಯಾಗುತ್ತದೆ ಎಂಬುವುದು ಅವರ ಅಭಿಪ್ರಾಯ.


ಎಳೆಯರಲ್ಲಿ ಜಾಗ್ರತಿ ಮುಡಿಸುತ್ತಿರುವ ಸಮೀರ್ ಬೋರ್ಡೊಲೊಯ್


ಗ್ರೀನ್ ಕಮಾಂಡೋಗಳ ಪರಿಕಲ್ಪನೆ

ದೇಶಾದ್ಯಂತ 300 ಕ್ಕೂ ಹೆಚ್ಚು ಯುವಕರು ತಮ್ಮನ್ನು ಇಂದು ಗ್ರೀನ್ ಕಮಾಂಡೋಗಳಾಗಿ ತೊಡಗಿಸಿಕೊಂಡಿದ್ದಾರೆ, ರೈತ ಸಮೀರ್ ತಮ್ಮ ಪ್ರದೇಶಗಳಲ್ಲಿ ಶೂನ್ಯ-ವೆಚ್ಚದ ಸಾವಯವ ಕೃಷಿಯನ್ನು ಉತ್ತೇಜಿಸಲು ಪರಸ್ಪರ ಬೆಂಬಲಿಸುವವರ ಕೂಟವನ್ನು ರಚಿಸಿದರು. ಬದಲಾವಣೆಯ ತರಬಯಸುವ ಈ ಸದಸ್ಯರ ಪಾತ್ರವು ಕೇವಲ ಕೃಷಿ ಸಮುದಾಯಗಳಿಗೆ ಶಕ್ತಿ ತುಂಬುವುದಕ್ಕೆ ಸೀಮಿತವಾಗಿರದೆ, ಅವುಗಳ ಉತ್ಪನ್ನಗಳನ್ನು ನಗರ ಕೇಂದ್ರಗಳಿಗೆ ಮಾರಾಟ ಮಾಡುವುದು ಮತ್ತು ಸಂಪರ್ಕಿಸುವುದು ಮತ್ತು ಅಂತಿಮವಾಗಿ ರೈತರು ಘನ ಮತ್ತು ಸುಸ್ಥಿರ ಜೀವನವನ್ನು ಗಳಿಸಲು ಸಹಕರಿಸುವುದಾಗಿದೆ.


ಸಮೀರ್‌ ರವರ ಕಲಿಕಾ ಕೇಂದ್ರದಲ್ಲಿ ವಸತಿ-ಅನುಭವದ ತರಬೇತಿಯನ್ನು ನೀಡಲಾಗುವುದು. ಹಸಿರು ಕಮಾಂಡೋಗಳು ಆರೋಗ್ಯಕರ ಮತ್ತು ಸುಸ್ಥಿರ ಆಹಾರ ಉತ್ಪಾದನಾ ಚಕ್ರವನ್ನು ರಚಿಸಲು ಮತ್ತು ಕೊಡುಗೆ ನೀಡಲು ಅಗತ್ಯವಾದ ವಿಮರ್ಶಾತ್ಮಕ ಚಿಂತನೆ ಮತ್ತು ಅನುಭೂತಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದ್ದಾರೆ. ಈ ತರಬೇತಿ ಕಾರ್ಯಕ್ರಮವು ‘ಸ್ಥಳೀಯ ಜನರು, ಸ್ಥಳೀಯ ಆಹಾರವನ್ನು ಬೆಳೆಯುವುದು, ಸ್ಥಳೀಯ ಆರ್ಥಿಕತೆಗಳನ್ನು ವೃದ್ಧಿಸುವುದು’ ಎಂಬ ಧ್ಯೇಯವನ್ನು ಇಟ್ಟುಕೊಂಡಿದೆ.


ಗ್ರೀನ್ ಕಮಾಂಡೋಗಳು ಬಳಸುತ್ತಿರುವ ಒಂದು ಪ್ರಮುಖ ಕೃಷಿ ವಿಧಾನವೆಂದರೆ ‘ಝಂ’ ಕೃಷಿ. ಈಗಾಗಲೇ ಸುಟ್ಟುಹೋದ ಭೂಮಿಯಲ್ಲಿ, ನೈಸರ್ಗಿಕ ಇಂಗಾಲದ ಸಿಂಕ್‌ಗಳನ್ನು ರಚಿಸಲು ಬಿದಿರಿನ ಕಾಡುಗಳು ಮತ್ತು ತೋಪುಗಳನ್ನು ಬಳಸುವುದನ್ನು ರೈತರಿಗೆ ಕಮಾಂಡೋಗಳು ಕಲಿಸುತ್ತಿದ್ದರೆ, ಅದರಿಂದ ಜಾಗತಿಕ ತಾಪಮಾನ ಏರಿಕೆಯ ಪ್ರಮಾಣವು ಕಡಿಮೆಯಾಗುತ್ತದೆ. ಮೊನೊ-ಕ್ರಾಪಿಂಗ್‌ನ ದುಷ್ಪರಿಣಾಮವು ಖಾದ್ಯ ಆಹಾರ ಕಾಡುಗಳನ್ನು ರಚಿಸುವ ಮೂಲಕ, ಅಸ್ತಿತ್ವದಲ್ಲಿರುವ ಅರಣ್ಯ ಭೂಮಿಯನ್ನು ಬಳಸಿಕೊಂಡು ನಾಶಪಡಿಸುವುದರಿಂದ ಇದು ರಕ್ಷಿಸುತ್ತದೆ.


ಇಂದು ಎನ್ ಇ ಆರ್ ಪ್ರದೇಶದ 2,500 ಕ್ಕೂ ಹೆಚ್ಚು ರೈತರ ಸಾಮೂಹಿಕ ಒಳಗೊಳ್ಳುವಿಕೆಯೊಂದಿಗೆ, ಗ್ರೀನ್ ಕಮಾಂಡೋಗಳು ಈಗಾಗಲೇ ಪರಿಸರ ಸ್ನೇಹಿ ಕೃಷಿ ವಿಧಾನಗಳಿಗಿಂತ ದೊಡ್ಡ ಪರಿಣಾಮವನ್ನು ಸೃಷ್ಟಿಸಿದ್ದಾರೆ. ಈ ರೈತರು ಈಗ ಸ್ವತಂತ್ರರಾಗಿ ವ್ಯವಸಾಯವನ್ನು ಪ್ರಾರಂಭಿಸಿದ್ದಾರೆ, ಅವರ ಆದಾಯ ಹೆಚ್ಚಾಗಲು ಪ್ರಾರಂಭಿಸಿದೆ, ಯುವಕರು ಕೃಷಿಯಲ್ಲಿ ಪೂರ್ಣ ಸಮಯದ ವೃತ್ತಿಯನ್ನು ಅನ್ವೇಷಿಸಲು ಪ್ರಾರಂಭಿಸುತ್ತಿದ್ದಾರೆ ಮತ್ತು ಸುತ್ತಲೂ ಸಾಮಾಜಿಕ ಒಗ್ಗಟ್ಟು ಕೂಡ ಹೆಚ್ಚುತ್ತಿದೆ.